Saturday, August 3, 2013

ಬೇಸಗೆಯಲಿ ಮಳೆ ಚೆಂದ 
ಮಳೆಗಾಲದಿ ಬಿಸಿಲು ಅಂದ
-ಗುರು
ತಿಳಿದವರು ನುಡಿದ ಅಸತ್ಯವು ಸತ್ಯ 
ತಿಳಿಯದವ ನುಡಿದ ಸತ್ಯವು ಅಸತ್ಯ
-ಗುರು
ತತ್ವ ಹೇಳೋಕೆ ಚಂದ 
ನ್ಯಾಯ ಕೇಳೋಕೆ ಅಂದ 
-ಗುರು
ಪರರಿಗೊಂದು ನ್ಯಾಯ ತನಗೊಂದು ನ್ಯಾಯ 
ಇದು ಬುದ್ದಿಜೀವಿಗಳ ಜೀವನದ ಅಡಿಪಾಯ
-ಗುರು
ಜಾತ್ಯತಿತೆಯ ಅಡಿಗಟ್ಟು  ಜಾತಿ
ಸಮಾನತೆಯ ಅಡಿಗಟ್ಟು ತತ್ವ 
-ಗುರು 
ಮೌನಿಯ  ಮಾತು ಚಂದ 
ಹರಟೆಮಲ್ಲನ  ಮೌನ ಚಂದ
-ಗುರು